ಸಹಜ ಸ್ಥಿತಿಯತ್ತ ಕಣಿವೆ ರಾಜ್ಯ: ಇಂದಿನಿಂದ 190 ಶಾಲೆಗಳು ಪುನಾರಂಭ

 ಹದಿನೈದು ದಿನಗಳ ಪ್ರಕ್ಷುಬ್ದ ಪರಿಸ್ಥಿತಿಯ ಬಳಿಕ ಕಣಿವೆ ರಾಜ್ಯ ಜಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ. ರಾಜ್ಯದಲ್ಲಿನ  ಪ್ರಾಥಮಿಕ ಶಾಲೆಗಳು ಇಂದು ಮತ್ತೆ ತೆರೆಯಲ್ಪಡುತ್ತವೆ, 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಹದಿನೈದು ದಿನಗಳ ಪ್ರಕ್ಷುಬ್ದ ಪರಿಸ್ಥಿತಿಯ ಬಳಿಕ ಕಣಿವೆ ರಾಜ್ಯ ಜಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಪ್ರಾರಾಜ್ಯದಲ್ಲಿನ  ಥಮಿಕ ಶಾಲೆಗಳು ಇಂದು ಮತ್ತೆ ತೆರೆಯಲ್ಪಡುತ್ತವೆ, ಆದರೆ ನಿರ್ಬಂಧಗಳ ಕಾರಣದಿಂದಾಗಿ ಹೆಚ್ಚಿನ ಹಾಜರಾತಿ ಇರುವುದಿಲ್ಲ ಎಂದು ಅಧಿಕಾರಿಗಳು ಭಾವಿಸುತ್ತಾರೆ.

ಭಾನುವಾರ, ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಕಾಶ್ಮೀರ ಕಣಿವೆಯಲ್ಲಿ ಇನ್ನೂ 10 ದೂರವಾಣಿ ಸಂಭಾಷಣಾ ಕೇಂದ್ರಗಳನ್ನು ಕಾರ್ಯಗತಗೊಳಿಸಿದ್ದಾರೆ.ಆದರೆ ಶನಿವಾರ ಪುನಃಸ್ಥಾಪಿಸಲಾದ 17 ಕೇಂದ್ರಗಳಲ್ಲಿ ಒಂದನ್ನು ಮತ್ತೆ ಮುಚ್ಚಲಾಗಿದೆ. ತಪ್ಪು ಮಾಹಿತಿ ಪ್ರಚಾರಕ್ಕಾಗಿ ಲ್ಯಾಂಡ್‌ಲೈನ್ ಫೋನ್‌ಗಳನ್ನು ಬಳಸಲಾಗುತ್ತಿದೆ ಎಂಬ ವರದಿಗಳ ನಂತರ ಅಧಿಕಾರಿಗಳು 17 ವಿನಿಮಯ ಕೇಂದ್ರಗಳಲ್ಲಿ ಒಂದನ್ನು ಮುಚ್ಚಿದ್ದಾರೆ ಇವುಗಳೊಂದಿಗೆ, ಕಾಶ್ಮೀರ ಕಣಿವೆಯಲ್ಲಿ ಸುಮಾರು 50,000 ದಲ್ಲಿ ಸುಮಾರು 28,000 ಸ್ಥಿರ ದೂರವಾಣಿ ಫೋನ್‌ಗಳು ಕಾರ್ಯನಿರ್ವಹಿಸುತ್ತಿವೆ.

ಜನ ಸಂಚಾರ ಹಾಗೂ ಸಂಪರ್ಕದ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಕಡಿತಗೊಳಿಸಲಾಗುತ್ತಿದ್ದು ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಇನ್ನೂ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಇರಿಸಲಾಗಿದೆ.

ಕಣಿವೆಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರದ ವರದಿಯಾಗಿಲ್ಲ. ಆದರೆ ಶ್ರೀನಗರದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದೆ., ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ."ಸೋಮವಾರ ಒಂದು ದೊಡ್ಡ ಪರೀಕ್ಷೆ ಎದುರಾಗಲಿದೆ.ಯವರೆಗೆ, ಎಲ್ಲವೂ ನಿಯಂತ್ರಣದಲ್ಲಿದೆ ಮತ್ತು ಯಾವುದೇ ದೊಡ್ಡ ಗಲಭೆಗಳು ನಡೆದಿಲ್ಲ.ಕಣಿವೆಯ ದೊಡ್ಡ ಭಾಗಗಳಲ್ಲಿ ನಿರ್ಬಂಧಗಳನ್ನು ಕಠಿಣವಾಗಿಸಿರುವ ಕಾರಣ  ಪರಿಸ್ಥಿತಿ ಶಾಂತಿಯುತವಾಗಿ ಉಳಿಯುತ್ತದೆ ಎಂದು ನಾವು ಭಾವಿಸುತ್ತೇವೆ," ಹೆಸರು ಬಹಿರಂಗಪಡಿಸದ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com