ಪುಣೆ: ಆರ್ಬಿಐಯನ್ನು ಕೇಂದ್ರ ಸರ್ಕಾರ ಆರ್ಬಿಐ ನಿಧಿಯನ್ನು ಕದಿಯುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕೆಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್, ಇಂಥ ಆರೋಪಗಳನ್ನು ಮಾಡುವ ಮೊದಲು ರಾಹುಲ್ ಗಾಂಧಿ ಅವರ ಪಕ್ಷದ ವಿತ್ತ ಸಚಿವರ ಬಗ್ಗೆ ಮಾತನಾಡಲಿ ಎಂದು ಲೇವಡಿ ಮಾಡಿದ್ದಾರೆ.
ಆರ್ಬಿಐನಿಂದ ದಾಖಲೆಯ ನಗದು ವರ್ಗಾವಣೆಯ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಹಣಕಾಸು ಸಚಿವರು ಮಾಡಿಕೊಂಡ ಸ್ವಯಂ ಅಪರಾಧ ಪರಿಹರಿಸಲು, ಆರ್ಥಿಕ ವಿಪತ್ತು ನಿವಾರಣೆಗೆ ಕೇಂದ್ರ ಬ್ಯಾಂಕಿನಿಂದ ಹಣವನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದ್ದರು.
Advertisement