ಬಿದ್ದು ಮೀಸೆ ಮಣ್ಣಾದ್ರೂ, 'ಚೋರ್' ವರಸೆ ಬಿಡದ ರಾಹುಲ್‌ ಗಾಂಧಿ ವಿರುದ್ಧ ನಿರ್ಮಲಾ ಸೀತಾರಾಮನ್‌ ಕಿಡಿ

ಆರ್‌ಬಿಐಯನ್ನು ಕೇಂದ್ರ ಸರ್ಕಾರ ಆರ್‌ಬಿಐ ನಿಧಿಯನ್ನು ಕದಿಯುತ್ತಿದೆ ಎಂಬ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕೆಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌, ಇಂಥ ಆರೋಪಗಳನ್ನು ಮಾಡುವ ಮೊದಲು ರಾಹುಲ್‌ ಗಾಂಧಿ...
ರಾಹುಲ್ ಗಾಂಧಿ-ನಿರ್ಮಲಾ ಸೀತಾರಾಮನ್
ರಾಹುಲ್ ಗಾಂಧಿ-ನಿರ್ಮಲಾ ಸೀತಾರಾಮನ್

ಪುಣೆ: ಆರ್‌ಬಿಐಯನ್ನು ಕೇಂದ್ರ ಸರ್ಕಾರ ಆರ್‌ಬಿಐ ನಿಧಿಯನ್ನು ಕದಿಯುತ್ತಿದೆ ಎಂಬ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕೆಗೆ ಪ್ರತ್ಯುತ್ತರ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌, ಇಂಥ ಆರೋಪಗಳನ್ನು ಮಾಡುವ ಮೊದಲು ರಾಹುಲ್‌ ಗಾಂಧಿ ಅವರ ಪಕ್ಷದ ವಿತ್ತ ಸಚಿವರ ಬಗ್ಗೆ ಮಾತನಾಡಲಿ ಎಂದು ಲೇವಡಿ ಮಾಡಿದ್ದಾರೆ.

ಆರ್‌ಬಿಐನಿಂದ ದಾಖಲೆಯ ನಗದು ವರ್ಗಾವಣೆಯ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಹಣಕಾಸು ಸಚಿವರು ಮಾಡಿಕೊಂಡ ಸ್ವಯಂ ಅಪರಾಧ ಪರಿಹರಿಸಲು, ಆರ್ಥಿಕ ವಿಪತ್ತು ನಿವಾರಣೆಗೆ ಕೇಂದ್ರ ಬ್ಯಾಂಕಿನಿಂದ ಹಣವನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com