ಸೋಲಾಪುರ್: ಸರ್ಕಾರದ ಕೆಲಸದಲ್ಲಿ ಅಡೆತಡೆ ಉಂಟುಮಾಡಿದ್ದ ಆರೋಪದ ಮೇಲೆ ಕೇಂದ್ರ ಸರ್ಕಾರದ ಮಾಜಿ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರ ಪುತ್ರಿ ಕಾಂಗ್ರೆಸ್ ಶಾಸಕಿ ಪ್ರಣಿತಿ ಶಿಂಧೆ ಮತ್ತು ಪಕ್ಷದ ಇತರ ಕಾರ್ಯಕರ್ತರ ವಿರುದ್ಧ ಮಹಾರಾಷ್ಟ್ರ ಜಿಲ್ಲಾ ನ್ಯಾಯಾಲಯ ಜಾಮೀನುಸಹಿತ ಬಂಧನ ವಾರಂಟ್ ಹೊರಡಿಸಿದೆ.
ಈ ವಿಷಯವನ್ನು ಸ್ವತಃ ಪ್ರಣಿತಿ ಶಿಂಧೆಯೇ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ. ಸೆಪ್ಟೆಂಬರ್ 3ರಂದು ವಿಚಾರಣೆಗೆ ಹಾಜರಾಗಲು ಕೋರ್ಟ್ ಆದೇಶ ನೀಡಿದೆ ಎಂದಷ್ಟೇ ಹೇಳಿದ್ದಾರೆ. ಕಳೆದ ವರ್ಷದ ಜನವರಿಯಲ್ಲಿ ನಾನು ಮತ್ತು ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನ ವಾರಂಟ್ ಹೊರಡಿಸಲಾಗಿದ್ದು ಈ ರೀತಿ ಆಡಳಿತ ಪಕ್ಷದವರು ನಮ್ಮನ್ನು ಕಾಡುತ್ತಿದ್ದಾರೆ ಎಂದರು.
Advertisement