ಹೈದರಾಬಾದ್: ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಎನ್ಕೌಂಟರ್ ನಲ್ಲಿ ಹತ್ಯೆಯಾದ ಆರೋಪಿಗಳಲ್ಲಿ ಒಬ್ಬನಾದ ಚೆನ್ನಕೇಶವಲು ಮೃತದೇಹವನ್ನು ತಮಗೆ ಒಪ್ಪಿಸುವಂತೆ ಆತನ ಕುಟುಂಬದವರು ನಾರಾಯಣಪೇಟ್ ಜಿಲ್ಲೆಯ ಮುತ್ಕಲ್ ಮಂಡಲದ ಗುಡಿಗಂಡ್ಲ ಗ್ರಾಮದಲ್ಲಿ ಧರಣಿ ನಡೆಸಿದ್ದಾರೆ.
ಆರೋಪಿ ಚೆನ್ನಕೇಶವುಲು ಪತ್ನಿ ರೇಣುಕಾ ಮತ್ತು ತಾಯಿ ಜಯಮ್ಮ ಅವರು ರಸ್ತೆಯಲ್ಲಿ ಧರಣಿ ನಡೆಸಿ, ಮೃತದೇಹದ ಅಂತ್ಯಕ್ರಿಯೆಯನ್ನು ಪೊಲೀಸರು ನಡೆಸುವ ಬದಲಿಗೆ ತಮ್ಮ ಕೃಷಿ ಜಮೀನನಲ್ಲೇ ನೆರವೇರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಹತ್ಯೆಯ ಆರೋಪಿಯ ಕುಟುಂಬದವರು ಧರಣಿ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.
Advertisement