ಕರ್ನಾಟಕ ಜನತೆ ಕಾಂಗ್ರೆಸ್-ಜೆಡಿಎಸ್ ಗೆ ತಕ್ಕ ಪಾಠ ಕಲಿಸಿದ್ದಾರೆ, ಫಲಿತಾಂಶ ಸ್ಪಷ್ಟ ಸಂದೇಶ ನೀಡಿದೆ: ಪಿಎಂ ಮೋದಿ

ಕರ್ನಾಟಕದ ಜನತೆ ಸ್ಥಿರ ಮತ್ತು ಬಲಿಷ್ಠ ಸರ್ಕಾರದ ತಾಕತ್ತು ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರ್ಯಾಲಿಯಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ
ರ್ಯಾಲಿಯಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ

ಹಜರಿಬಾಗ್(ಜಾರ್ಖಂಡ್): ಕರ್ನಾಟಕದ ಜನತೆ ಸ್ಥಿರ ಮತ್ತು ಬಲಿಷ್ಠ ಸರ್ಕಾರದ ತಾಕತ್ತು ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಜಾರ್ಖಂಡ್ ವಿಧಾನಸಭೆ ಚುನಾವಣೆಯ ಅಂಗವಾಗಿ ಇಂದು ಅಲ್ಲಿನ ಹಜರಿಬಾಗ್ ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ಉಪ ಚುನಾವಣೆಯ ಫಲಿತಾಂಶವನ್ನು ಅಲ್ಲಿ ಪ್ರಸ್ತಾಪಿಸಿದರು. 


ಕರ್ನಾಟಕದಲ್ಲಿ ಜನರ ತೀರ್ಪಿಗೆ ಮೋಸ ಮಾಡಿದವರಿಗೆ ಮತದಾರರು ಪ್ರಜಾಪ್ರಭುತ್ವ ಮಾದರಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರಬೇಕೆ, ಬೇಡವೇ ಎಂದು ಇಂದು ನಿರ್ಧಾರವಾಗಬೇಕಾಗಿತ್ತು. ಅದಕ್ಕೆ ಇಂದಿನ ಫಲಿತಾಂಶದಲ್ಲಿ ಉತ್ತರ ಸಿಕ್ಕಿದೆ. ಜನರಿಗೆ ಸ್ಥಿರ ಸರ್ಕಾರ ಬೇಕು, ಆ ಸ್ಥಿರ ಸರ್ಕಾರ ನೀಡುವ ಪಕ್ಷವಾಗಿ ಬಿಜೆಪಿ ಮೇಲೆ ಮತದಾರರು ನಂಬಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ ಎಂದರು.


ಕರ್ನಾಟಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಶಿಕ್ಷೆ ಕೊಟ್ಟಿದ್ದಾರೆ. ಇಂದಿನ ಉಪ ಚುನಾವಣೆ ಫಲಿತಾಂಶ ದೇಶದ ಎಲ್ಲಾ ರಾಜ್ಯಗಳಿಗೂ ಒಂದು ಸಂದೇಶ ನೀಡಿದೆ. ಮತದಾರರ ತೀರ್ಪಿಗೆ ವಿರುದ್ಧವಾಗಿ ಹೋಗಿ ಮತದಾರರನ್ನು ಅವಮಾನಿಸಿದವರಿಗೆ ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದುವೇ ನಿದರ್ಶನ ಎಂದು ವಿರೋಧ ಪಕ್ಷಗಳಿಗೆ ಪಿಎಂ ಮೋದಿ ತಿರುಗೇಟು ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com