ರಾಬ್ರಿದೇವಿ ನನ್ನ ಮೇಲೆ ಹಲ್ಲೆ ಮಾಡಿ ಜುಟ್ಟು ಹಿಡಿದು ಹೊರಹಾಕಿದರು: ಐಶ್ವರ್ಯ ರಾಯ್

ಆರ್ ಜೆ ಡಿ ನಾಯಕಿ, ಬಿಹಾರ ಮಾಜಿ ಮುಖ್ಯಮಂತ್ರಿ ತಮ್ಮ ಅತ್ತೆ ರಾಬ್ರಿ ದೇವಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜುಟ್ಟು ಹಿಡಿದು ಮನೆಯಿಂದ ಹೊರ ತಬ್ಬಿದ್ದಾರೆ.
ರಾಬ್ರಿದೇವಿ
ರಾಬ್ರಿದೇವಿ

ಪಾಟ್ನಾ: ಆರ್ ಜೆ ಡಿ ನಾಯಕಿ, ಬಿಹಾರ ಮಾಜಿ ಮುಖ್ಯಮಂತ್ರಿ ತಮ್ಮ ಅತ್ತೆ ರಾಬ್ರಿ ದೇವಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜುಟ್ಟು ಹಿಡಿದು ಮನೆಯಿಂದ ಹೊರ ತಬ್ಬಿದ್ದಾರೆ ಎಂದು ರಾಬ್ರಿದೇವಿ- ಲಾಲೂ ಪ್ರಸಾದ್ ಯಾದವ್ ಹಿರಿಯ ಸೊಸೆ ಐಶ್ವರ್ಯ ರಾಯ್ ಭಾನುವಾರ ಸಂಜೆ ಆರೋಪಿಸುವ ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿದೆ.

ರಾಜಧಾನಿಯ 10 ಸರ್ಕ್ಯೂಲರ್ ರಸ್ತೆಯಲ್ಲಿರುವ ಅತ್ತೆ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯ ಅಧಿಕೃತ ನಿವಾಸ ಮುಂದೆ ರೋಧಿಸುತ್ತಲೇ ಕಿಕ್ಕಿರಿದ ಮಾಧ್ಯಮಗಳೊಂದಿಗೆ ಮಾತನಾಡಿದ ಸೊಸೆ ಐಶ್ವರ್ಯ ರಾಯ್, ಅತ್ತೆ ರಾಬ್ರಿ ದೇವಿ ತಮ್ಮ ಥಳಿಸಿ, ಕಾಲಿನಿಂದ ಒದ್ದು ಜುಟ್ಟು ಹಿಡಿದು ಮನೆಯಿಂದ ಹೊರ ತಳ್ಳಿದ್ದಾರೆ ಎಂದು ಹೇಳಿಕೊಂಡರು.

ಹೊರಗೆ ಮಳೆ ಸುರಿಯುತ್ತಿದ್ದರೂ, ತೀವ್ರ ಚಳಿಯ ನಡುವೆಯೇ ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ತಮ್ಮ ವಿಚ್ಚೇಧನ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳು ಒಳಗೊಂಡಿದ್ದ ತಮ್ಮ ಮೊಬೈಲ್ ಅತ್ತೆ ಕಸಿದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com