ಭದ್ರತಾ ಸೌಲಭ್ಯ ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ  ಅಣ್ಣಾ ಹಜಾರೆ ಪತ್ರ 

ಮಹಾರಾಷ್ಟ್ರ ಸರ್ಕಾರದಿಂದ  ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ  ಒತ್ತಾಯಿಸಿದ್ದಾರೆ.
ಅಣ್ಣಾ ಹಜಾರೆ
ಅಣ್ಣಾ ಹಜಾರೆ

ಪುಣೆ:  ಮಹಾರಾಷ್ಟ್ರ ಸರ್ಕಾರದಿಂದ  ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ  ಒತ್ತಾಯಿಸಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದು,  ಸಾರ್ವಜನಿಕ ಹಣವನ್ನು ವ್ಯರ್ಥ್ಯ ಮಾಡಿ ಭದ್ರತಾ ಸೌಲಭ್ಯ ನೀಡುವುದು ಬೇಡ ಎಂದಿದ್ದಾರೆ. 

ಈ ಹಿಂದೆ ಅನೇಕ ಜನರು ತಮನ್ನು ಬೆದರಿಸಿದ್ದಾರೆ. ಆದರೆ, ಅವರನ್ನು ಯಾವಾಗಲೂ ನಿರ್ಲಕ್ಷಿಸಿರುವುದಾಗಿ ಹೇಳಿರುವ ಅಣ್ಣಾ ಹಜಾರೆ, ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಈ ಮಧ್ಯೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ಕೆಲ ಗಣ್ಯ ವ್ಯಕ್ತಿಗಳಿಗೆ ನೀಡಿದ ಭದ್ರತಾ ಸೌಲಭ್ಯವನ್ನು ಸರ್ಕಾರ ಹಿಂಪಡೆದಿದ್ದು, ತಮಗೂ ನೀಡಲಾಗಿರುವ ಭದ್ರತಾ ಸೌಲಭ್ಯ ಹಿಂಪಡೆಯುವಂತೆ  ಒತ್ತಾಯಿಸಿ ಅಣ್ಣಾ ಹಜಾರೆ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com