ನುಸುಳುಕೋರರ ಮೇಲೆ ರಾಹುಲ್'ಗೆ ಪ್ರೀತಿಯಿದ್ದರೆ, ಇಟಲಿಗೆ ಕರೆದೊಯ್ಯಲಿ: ಗಿರಿರಾಜ್ ಸಿಂಗ್

ನುಸುಳುಕೋರರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪ್ರೀತಿಯಿದ್ದರೆ, ಅವರನ್ನು ಇಟಲಿಗೆ ಕರೆದೊಯ್ಯಲಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಹೇಳಿದ್ದಾರೆ.
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್

ರಾಂಚಿ: ನುಸುಳುಕೋರರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪ್ರೀತಿಯಿದ್ದರೆ, ಅವರನ್ನು ಇಟಲಿಗೆ ಕರೆದೊಯ್ಯಲಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಹೇಳಿದ್ದಾರೆ. 

ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, ಪೌರತ್ವ ಕಾಯ್ದೆ ಕುರಿತಂತೆ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಸಿ ದೇಶವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಹುಲ್ ಗಾಂಧಿಯವರಿಗೆ ನುಸುಳುಕೋರರ ಮೇಲೆ ಪ್ರೀತಿ ಇರುವುದೇ ಆದರೆ, ಇಟಲಿಗೆ ಕರೆದುಕೊಂಡು ಹೋಗಲಿ ಎಂದು ಹೇಳಿದ್ದಾರೆ. 

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾ ಪೌರತ್ವ ಮಸೂದೆ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಓಲೈಕೆಯ ರಾಜಕೀಯದಿಂದ ಅದನ್ನು ಮುಂದುವರೆಸಿರಲಿಲ್ಲ. ಇದೀಗ ಅದೇ ಕಾಂಗ್ರೆಸ್ ಸುಳ್ಳುಗಳನ್ನು ದೇಶವನ್ನು  ಒಡೆಯಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com