ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಸಮಾಜವಾದಿ ಶಾಸಕರು ಪಕ್ಷದ ಕಚೇರಿಯಿಂದ ವಿಧಾನಸಭೆಯವರೆಗೂ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಎಸ್ ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಇಂದು ಚಾಲನೆ ನೀಡಿದರು.
ಎನ್ ಆರ್ ಸಿ, ಎನ್ ಪಿಆರ್ ಅಗತ್ಯವಿಲ್ಲ, ನಮಗೆ ಉದ್ಯೋಗ ಅಗತ್ಯವಾಗಿದೆ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಯಾರೊಬ್ಬರ ಪೌರತ್ವವನ್ನು ಬಿಜೆಪಿ ನಿರ್ಧಾರ ಮಾಡಬಾರದು, ಎನ್ ಪಿಆರ್ ಫಾರಂ ಭರ್ತಿ ಮಾಡಲ್ಲ ಎಂದು ಅಖಿಲೇಶ್ ಯಾದವ್ ಭಾನುವಾರ ಹೇಳಿಕೆ ನೀಡಿದ್ದರು.
ಸಮಾಜವಾದಿ ಪಕ್ಷ ಸಂವಿಧಾನವನ್ನು ಉಳಿಸಲು ಬಯಸಿದರೆ ಮತ್ತೊಂದು ಬಿಜೆಪಿ ಅದನ್ನು ನಾಶ ಮಾಡಲು ಹೊರಟಿದೆ. ಇದಕ್ಕೆ ಹೆಚ್ಚಿನ ಗಮನ ಪ್ರಾಮುಖ್ಯತೆ ನೀಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಯುವಕರಿಗೆ ಉದ್ಯೋಗ ಬೇಕಾಗಿದೆ ಎಂದು ಅವರು ಹೇಳಿದ್ದರು.
Advertisement