ಆನಂದ್ ತೆಲ್ತುಂಬೆಡ್ ಬಂಧನಕ್ಕೂ ಮುನ್ನ ಪೊಲೀಸರು ಇತರೆ ಆರೋಪಿಗಳಾದ ಸುಧಾ ಭಾರಧ್ವಾಜ್, ಪಿ ವರವರ ರಾವ್, ವೆರ್ನಾನ್ ಗೊನ್ಜಾಳ್ವಾಸ್ ಮತ್ತು ಅರುಣ್ ಪರೇರ ಅವರನ್ನು ಬಂಧಿಸಿದ್ದರು. ಅಂತೆಯೇ ಪ್ರಕರಣದ ಮತ್ತೋರ್ವ ಆರೋಪಿ ಹಾಗೂ ಹೋರಾಟಗಾರ ಗೌತಮ್ ನವಲಖ ಅವರನ್ನೂ ಪೊಲೀಸರು ಬಂಧಿಸಲು ಯತ್ನಿಸಿದ್ದರು. ಆದರೆ ದೆಹಲಿ ನ್ಯಾಯಾಲಯ ಅವರ ಬಂಧನಕ್ಕೆ ತಡೆ ನೀಡಿತ್ತು.