ಇದೇ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಪರವಾಗಿ ನಿಂತ ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದ ನಿರ್ಮಲಾ, ಸಿಬಿಐ ತನ್ನ ಕೆಲಸ ಮಾಡಬೇಕೇ ಬೇಡವೇ ಎಂದು ಪ್ರಶ್ನಿಸಿದರು. ಅಂತೆಯೇ ಸಿಬಿಐ ಕೆಲಸ ಮಾಡಲಿಲ್ಲ ಎಂದರೆ ಅದು ಪಂಜರದ ಗಿಳಿ.. ಕೇಂದ್ರ ಸರ್ಕಾರ ಅದರ ರೆಕ್ಕೆ ಪುಕ್ಕ ಕತ್ತರಿಸಿ ಹಾಕಿದೆ ಎಂದು ಬೊಬ್ಬಿಡುತ್ತಾರೆ. ಅದು ಅದರ ಪಾಡಿಗೆ ಕೆಲಸ ಮಾಡಿದರೆ ಷಡ್ಯಂತ್ರ ಎಂದು ಆರೋಪಿಸುತ್ತಾರೆ. ಮೊದಲು ನಿಮ್ಮ ಮನಃಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಿ ಎಂದು ನಿರ್ಮಲಾ ಕಿಡಿಕಾರಿದ್ದಾರೆ.