ಕೇರಳ ಮೀನುಗಾರರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ: ಶಶಿ ತರೂರ್ ಶಿಫಾರಸು

ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಪ್ರಾಣ ಕಾಪಾಡಿದ ಮೀನುಗಾರರಿಗೆ ನೊಬೆಲ್​ ಶಾಂತಿ ...
ಶಶಿತರೂರ್
ಶಶಿತರೂರ್
ತಿರುವನಂತಪುರ: ಕಳೆದ ವರ್ಷ ಕೇರಳದಲ್ಲಿ  ಸಂಭವಿಸಿದ ಪ್ರವಾಹದಲ್ಲಿ ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಪ್ರಾಣ ಕಾಪಾಡಿದ ಮೀನುಗಾರರಿಗೆ ನೊಬೆಲ್​ ಶಾಂತಿ ಪ್ರಶಸ್ತಿ ನೀಡುವಂತೆ ಕಾಂಗ್ರೆಸ್​ನಾಯಕ ಹಾಗೂ ಸಂಸದ ಶಶಿ ತರೂರ್​ನೊಬೆಲ್​ ಸಮಿತಿಗೆ ಪತ್ರ ಬರೆದಿದ್ದಾರೆ.
ನಾರ್ವೆಯಲ್ಲಿರುವ ನೊಬೆಲ್​ ಕಚೇರಿಗೆ ಪತ್ರ ಬರೆದಿರುವ ತರೂರ್​ ಅವರು ಪ್ರವಾಹದ ಪರಿಸ್ಥಿತಿಯಲ್ಲಿ ಅಪರಿಮಿತ ಶ್ರಮ ಹಾಕಿದ ಮೀನುಗಾರರನ್ನು ಹಾಡಿ ಹೊಗಳಿದ್ದಾರೆ. 
ನೊಬೆಲ್​ಸಮಿತಿ ಮುಖ್ಯಸ್ಥ ಬೆರಿತ್​ರೈಸ್​ ಆ್ಯಂಡ್ರೂಸನ್​ಅವರನ್ನುದ್ದೇಶಿಸಿ ತರೂರ್ ಈ ಪತ್ರ ಬರೆದಿದ್ದಾರೆ.  
ಕೇರಳ ಪ್ರವಾಹದ ವೇಳೆ ತನ್ನ ಜೀವವನ್ನೇ ಪಣಕ್ಕಿಟ್ಟು ನೂರಕ್ಕೂ ಹೆಚ್ಚು ಜನರನ್ನು ತಮ್ಮ ತೆಪ್ಪದಲ್ಲಿ ಕಾಪಾಡಿದ್ದ ಜಿನೇಶ್​ಕಾರ್ಯವನ್ನು ದೇಶವೇ ಕೊಂಡಾಡಿತ್ತು. ತಮ್ಮ ಜೇಬಿನಿಂದಲೇ ದುಡ್ಡು ಖರ್ಚು ಮಾಡಿದ್ದ ಜಿನೇಶ್​ ಮತ್ತು ಇತರ ಮೀನುಗಾರರು 65,000 ಜನರನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಿದ್ದರು. ಇವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಮೀನುಗಾರರ ಗುಂಪುಗಳು ಹೆಚ್ಚಿನ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಭಾಗಗಳನ್ನು ಪ್ರತಿನಿಧಿಸುತ್ತವೆ. ಕೇರಳದ ಮೀನುಗಾರರು ಇದಕ್ಕೆ ಹೊರತಾಗಿಲ್ಲ,
ಪ್ರವಾಹದ ವೇಳೆ ಅವರ ಜೀವ ರಕ್ಷಕ ಸೇವೆ ಅತ್ಯಮೂಲ್ಯವಾದದ್ದು, ಹೀಗಾಗಿ ಅವರಿಗೆ ನೊಬೆಲ್ ಶಾಂತಿ ಪಾರಿತೋಷಕ ನೀಡಬೇಕೆಂದು, ನೊಬೆಲ್ ಪ್ರಶಸ್ತಿ ನೀಡಿದರೇ ಸಮುದಾಯ ಕೃತಜ್ಞಾ ಪೂರ್ವಕವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com