ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದ ರಾಜೀವ್ ಮೆಹರ್ಷಿ ಅವರೇ ಸಂಸತ್ ನಲ್ಲಿ ಒಪ್ಪಂದದ ಬಗ್ಗೆ ವರದಿ ಮಂಡಿಸುವುದು ಸೂಕ್ತವಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ರಾಜೀವ್ ಮೆಹರ್ಷಿ ತಮ್ಮನ್ನೂ ರಕ್ಷಿಸಿಕೊಂಡು ಸರ್ಕಾರವನ್ನೂ ರಕ್ಷಿಸುವ ಸಾಧ್ಯತೆ ಇದೆ ಆದ್ದರಿಂದ ಇದು ನೈತಿಕವಾಗಿ, ಕಾನೂನಾತ್ಮಕವಾಗಿ ಸೂಕ್ತವಲ್ಲ ಎಂದು ಕಾಂಗ್ರೆಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.