16 ನೇ ಲೋಕಸಭೆಯ ಕೊನೆಯ ಅಧಿವೇಶನ ಇದಾಗಿರಲಿದ್ದು, ಕೊನೆಯ ಅಧಿವೇಶನ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಮೋದಿ ಸರ್ಕಾರ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿ ಮಂಡಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಸಿಎಜಿ ವರದಿ ಮಂಡನೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಒಪ್ಪಂದ ನಡೆದಾ ಈಗ ಸಿಎಜಿ ಆಗಿರುವ ರಾಜೀವ್ ಮೆಹರ್ಷಿ ಆಗಿನ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಾಗಿದ್ದರು. ಒಪ್ಪಂದದ ವೇಳೆ ಆಗ ಅವರ ಪಾತ್ರ ಇದ್ದಿದ್ದರಿಂದ ಈಗಿನ ಸಿಎಜಿ ವರದಿ ಹಿತಾಸಕ್ತಿಯ ಸಂಘರ್ಷಕ್ಕೀಡಾಗಲಿದ್ದು ಸತ್ಯ ಮರೆಮಾಚುವ ಸಾಧ್ಯತೆಗಳಿವೆ ಎಂದು ತಗಾದೆ ತೆಗೆದಿದೆ.