ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯನ್ನು ಖಂಡಿಸಿ, ಟ್ವೀಟ್ ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ವಿ.ಕೆ ಸಿಂಗ್, ನಿವೃತ್ತ ಯೋಧನಾಗಿ, ಭಾರತೀಯ ಪ್ರಜೆಯಾಗಿ ಈ ಹೇಡಿತನದ ದಾಳಿಗೆ ನನ್ನ ರಕ್ತ ಕುದಿಯುತ್ತಿದೆ. ಕೆಚ್ಚೆದೆಯ ಯೋಧರು ಪುಲ್ವಾಮದಲ್ಲಿ ಜೀವತೆತ್ತಿದ್ದಾರೆ. ಅವರ ನಿಸ್ವಾರ್ಥ ಬಲಿದಾನಕ್ಕೆ, ರಕ್ತದ ಪ್ರತಿ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಜೈ ಹಿಂದ್ ಎಂದು ವಿ.ಕೆ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.