ಹೇಡಿ ಕೃತ್ಯ, ರಕ್ತ ಕುದಿಯುತ್ತಿದೆ: ಯೋಧರ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಕೇಂದ್ರ ಸಚಿವ ವಿಕೆ ಸಿಂಗ್

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ.
Every drop of our soldier's blood will be avenged: Union Minister VK Singh on terror attack on CRPF
Every drop of our soldier's blood will be avenged: Union Minister VK Singh on terror attack on CRPF
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಧರ ಮೇಲಿನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂಬ ಧ್ವನಿ ಕೇಳಿಬಂದಿದ್ದು ಈ ನಡುವೆ ವಿಕೆ ಸಿಂಗ್ ಸಹ ಪ್ರತೀಕಾರ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ. 
ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯನ್ನು ಖಂಡಿಸಿ, ಟ್ವೀಟ್ ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ವಿ.ಕೆ ಸಿಂಗ್, ನಿವೃತ್ತ ಯೋಧನಾಗಿ, ಭಾರತೀಯ ಪ್ರಜೆಯಾಗಿ ಈ ಹೇಡಿತನದ ದಾಳಿಗೆ ನನ್ನ ರಕ್ತ ಕುದಿಯುತ್ತಿದೆ. ಕೆಚ್ಚೆದೆಯ ಯೋಧರು ಪುಲ್ವಾಮದಲ್ಲಿ ಜೀವತೆತ್ತಿದ್ದಾರೆ. ಅವರ ನಿಸ್ವಾರ್ಥ ಬಲಿದಾನಕ್ಕೆ, ರಕ್ತದ ಪ್ರತಿ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಜೈ ಹಿಂದ್ ಎಂದು ವಿ.ಕೆ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com