ಪುಲ್ವಾಮಾ ದಾಳಿ ಬಳಿಕ ಮಾತನಾಡಿದ್ದ ಸಿಧು "ಪುಲ್ವಾಮಾ ಉಗ್ರ ದಾಳಿ ಖಂಡನೀಯ, ಆದರೆ ಕಳೆದ ಎಪ್ಪತ್ತೇಳು ವರ್ಷಗಳಿಂದ ಈ ಘಟನೆ ಮರುಕಳಿಸುತ್ತಿದೆ. ಇದಕ್ಕೆಲ್ಲಾ ಪಾಕ್ ಜತೆ ಮಾತುಕತೆಯೊಂದೇ ಪರಿಹಾರ" ಎಂದಿದ್ದರು. ಅಲ್ಲದೆ ಒಂದು ಉಗ್ರ ದಾಳಿಯ ಹಿನ್ನೆಲೆಯಲ್ಲಿ ಇಡೀ ದೇಶವನ್ನು ದ್ವೇಷಿಸುವುದು ಒಳ್ಳೇದಲ್ಲ ಎಂದೂ ಹೇಳಿದ್ದರು.