ನಿಮ್ಮಂತಯೇ ನನ್ನ ಎದೆಯಲ್ಲೂ ಜ್ವಾಲೆ ಉರಿಯುತ್ತಿದೆ: ಪುಲ್ವಾಮ ದಾಳಿ ಬಗ್ಗೆ ಪ್ರಧಾನಿ ಮೋದಿ

ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಬಿಹಾರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ "ನಿಮ್ಮಂತೆಯೇ ನನ್ನ ಎದೆಯಲ್ಲೂ ಜ್ವಾಲೆ ಉರಿಯುತ್ತಿದೆ ಎಂದು
ನಿಮ್ಮಂತಯೇ ನನ್ನ ಎದೆಯಲ್ಲೂ ಜ್ವಾಲೆ ಉರಿಯುತ್ತಿವೆ: ಪುಲ್ವಾಮ ದಾಳಿ ಬಗ್ಗೆ ಪ್ರಧಾನಿ ಮೋದಿ
ನಿಮ್ಮಂತಯೇ ನನ್ನ ಎದೆಯಲ್ಲೂ ಜ್ವಾಲೆ ಉರಿಯುತ್ತಿವೆ: ಪುಲ್ವಾಮ ದಾಳಿ ಬಗ್ಗೆ ಪ್ರಧಾನಿ ಮೋದಿ
ಪಾಟ್ನಾ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಬಿಹಾರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ "ನಿಮ್ಮಂತೆಯೇ ನನ್ನ ಎದೆಯಲ್ಲೂ ಜ್ವಾಲೆ ಉರಿಯುತ್ತಿದೆ ಎಂದು ಹೇಳಿದ್ದಾರೆ. 
ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 44 ಯೋಧರ ಪೈಕಿ ಬಿಹಾರದ ಸಂಜಯ್ ಕುಮಾರ್ ಸಿನ್ಹಾ, ರತನ್ ಕುಮಾರ್ ಠಾಕೂರ್ ಸಹ ಇದ್ದು, ಪ್ರಧಾನಿ ಮೋದಿ ಯೋಧರ ತವರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತು ಪ್ರಾರಂಭಿಸುವುದಕ್ಕೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 
ಕೆಚ್ಚೆದೆಯ ಯೋಧರ ಸಾವಿಗೆ ಸಂತಾಪ ಸೂಚಿಸುತ್ತೇನೆ. ಉಗ್ರರ ಕೃತ್ಯಕ್ಕೆ ನಿಮ್ಮ ಎದೆಯಲ್ಲಿ ಹೇಗೆ ಜ್ವಾಲೆ ಉರಿಯುತ್ತಿದೆಯೋ ಹಾಗೆಯೆ ನನ್ನ ಎದೆಯಲ್ಲೂ ಜ್ವಾಲೆ ಹೊತ್ತಿ ಉರಿಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ವೇದಿಕೆಯಲ್ಲಿದ್ದ ಬಿಹಾರದ ಸಿಎಂ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾರತ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಎನ್ ಡಿಎ ಮೈತ್ರಿಕೂಟದ ಸರ್ಕಾರವಿರುವ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಫೆ.17 ರಂದು ಸುಮಾರು 33,000 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com