ಶ್ರೀನಗರ: ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಪಾಕಿಸ್ತಾನದ ಉಸಿರುಕಟ್ಟಿಸುವ ಕೆಲಸ ಮಾಡುತ್ತಿದೆ. ಒಂದೆಡೆ ವ್ಯಾಪಾರ ವಹಿವಾಟುಗಳ ವಿಷಯದಲ್ಲಿ ಪಾಕಿಸ್ತಾನಕ್ಕೆ ಹೊಡೆತ ನೀಡುತ್ತಿದ್ದರೆ. ಮತ್ತೊಂದೆಡೆ ಭಾರತ-ಪಾಕ್ ನಡುವೆ ಸೌಹಾರ್ದತೆಗಾಗಿ ಪ್ರಾರಂಭಿಸಲಾಗಿದ್ದ ಪೀಸ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.