ದೇಶಕ್ಕೆ ಬುಲೆಟ್ ಟ್ರೈನ್ ಬೇಕಿಲ್ಲ: ದೇಶ ಕಾಯುವ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಿದೆ: ಅಖಿಲೇಶ್

ದೇಶಕ್ಕೆ ಏನು ಬೇಕು, ಏನು ಬೇಡ ಎಂಬುದು ದೇಶ ಆಳುವವರಿಗೆ ತಿಳಿದಿರಬೇಕು, ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
ಲಕ್ನೋ: ದೇಶಕ್ಕೆ ಏನು ಬೇಕು, ಏನು ಬೇಡ ಎಂಬುದು ದೇಶ ಆಳುವವರಿಗೆ ತಿಳಿದಿರಬೇಕು, ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಾಗಿದೆ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು, ಎನ್ ಡಿಎ ಸರ್ಕಾರಕ್ಕೆ ದೇಶಕ್ಕೆ ಬುಲೆಟ್ ರೈಲು ತರಬೇಕೆಂಬ ಮಹತ್ವಾಕಾಂಕ್ಷೆ ಇದೆ, ಆದರೇ ಇಂದಿನ ಪರಿಸ್ಥಿತಿಯಲ್ಲಿ ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ, ಮುಖ್ಯವಾಗಿ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಾಗಿದೆ ಎಂದು ತಿಳಿಸಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ, ಇಡೀ ದೇಶವೇ ಯೋಧರ ಭದ್ರತೆ ಹಾಗೂ ರಕ್ಷಣೆ ಮೇಲೆ ನಿಂತಿದೆ, ಗಡಿಯಲ್ಲಿ ಭದ್ರತಾ ಪಡೆಗಳ ಸಾಮರ್ಥ್ಯ ಮತ್ತಷ್ಟು ಬಲಪಡಿಸಲು ಚಂತ್ರಗಾರಿಕೆ ರೂಪಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com