ತಮಿಳುನಾಡು: ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್ ರಾಜೇಂದ್ರನ್ ನಿಧನ

ತಮಿಳುನಾಡಿನ ವಿಲ್ಲಾಪುರಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್, ರಾಜೇಂದ್ರನ್ ಮೃತ ಪಟ್ಟಿದ್ದಾರೆ....
ಎಸ್. ರಾಜೇಂದ್ರನ್
ಎಸ್. ರಾಜೇಂದ್ರನ್
ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್, ರಾಜೇಂದ್ರನ್ ಮೃತ ಪಟ್ಟಿದ್ದಾರೆ.
ವಿಲ್ಲುಪುರಂ ಕ್ಷೇತ್ರದ ಸಂಸದರಾಗಿದ್ದ ರಾಜೇಂದ್ರನ್ ತಮ್ಮ ಕ್ಷೇತ್ರದಿಂದ ತ್ರಿವೇಂಡ್ರಮ್ ಗೆ ಸಂಚರಿಸುತ್ತಿದ್ದರು. ಕಾರು ಚಾಲಕ ಕಾರನ್ನು ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದಾನೆ,
ರಾಜೇಂದ್ರನ್ ಅವರ ತಲೆ ಮತ್ತು ಎದೆಗೆ ತೀವ್ರ ಗಾಯಗಳಾಗಿತ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅಷ್ಟರಲ್ಲೇ ಅವರು ಮರಣ ಹೊಂದಿದ್ದರು. ಕಾರು ಮತ್ತು ಅದಕ ಚಾಲಕ ಸುರಕ್ಷಿತವಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದೇ ಮೊದಲ ಬಾರಿಗೆ ವಿಲ್ಲುಪುರಂ ಕ್ಷೇತ್ರದಿಂದ ಸಂಸದರಾಗಿ ರಾಜೇಂದ್ರನ್ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com