ಇದೇ ವೇಳೆ ಏರ್ ಇಂಡಿಯಾ ಸಹ ಹೇಳಿಕೆ ಬಿಡುಗಡೆ ಮಾಡಿದ್ದು, ಇಂಡಿಗೋ ವಿಮಾನ ನಮ್ಮ ನೌಕರ ಶಿವ ಶಂಕರ್ ಗೆ ಡಿಕ್ಕಿ ಹೊಡೆದಿದ್ದು, ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಗಂಭೀರ ಗಾಯಗಳಾಗಿದ್ದು, ಬೆನ್ನೆಲುಬು ಮುರಿದಿದ್ದು, ಆತನ ಚೇತರಿಕೆಗೆ ನಾವು ಪ್ರಾರ್ಥಿಸುತ್ತಿದ್ದೇವೆ. ಇಂಡಿಗೋ ಸಂಸ್ಥೆ ಸೂಕ್ತ ಪರಿಹಾರ ನೀಡಬೇಕು, ಇದಲ್ಲದೇ ಕಾನೂನು ಕ್ರಮವನ್ನೂ ಎದುರಿಸಬೇಕೆಂದು ಹೇಳಿದೆ.