ಇದೇ ವೇಳೆ ಮಹಾಘಟ್ಬಂಧನ್ ವಿರುದ್ಧವೂ ವಾಗ್ದಾಳಿ ನಡೆಸಿದ, ನಟ, ರಾಜಕಾರಣಿ ಕಮಲ್ ಹಾಸನ್ ಅವರು, ಲೋಕಸಭೆ ಚುನಾವಣೆ ಗೆಲ್ಲುವ ಸಲುವಾಗಿ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಒಂದು ವೇಳೆ ತಮ್ಮ ವಿರೋಧಿ ಪಕ್ಷ ಗೆದ್ದಲ್ಲಿ ಮತ್ತೆ ಮೊದಲಿನಂತೆ ಆಗುತ್ತಾರೆ. ನಮ್ಮದು ಅಂತಹ ಪಕ್ಷವಲ್ಲ. ನಮ್ಮಲ್ಲಿ ಕುದುರೆ ವ್ಯಾಪರಕ್ಕೆ ಯಾವುದೇ ಅವಕಾಶವಿಲ್ಲ. ನಾವು ಸೋಲು-ಗೆಲುವಿನ ನಡುವೆಯೂ ಒಂದೇ ನಿಲುವನ್ನು ತಾಳುತ್ತೇವೆ ಎಂದು ಕಾಂಗ್ರೆಸ್-ಡಿಎಂಕೆ ನೇತೃತ್ವದ ಮಹಾಘಟ್ಬಂಧನ್ ವಿರುದ್ಧ ಕಿಡಿಕಾರಿದರು.