ಪುಲ್ವಾಮಾ ದಾಳಿ ನಂತರ ಮೂರು ಎನ್ ಕೌಂಟರ್, 9 ಉಗ್ರರು ಹತ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ...
ಪುಲ್ವಾಮಾ ದಾಳಿ ನಂತರ ಭದ್ರತಾ ಪಡೆಯಿಂದ ಸ್ಥಳ ತಪಾಸಣೆ
ಪುಲ್ವಾಮಾ ದಾಳಿ ನಂತರ ಭದ್ರತಾ ಪಡೆಯಿಂದ ಸ್ಥಳ ತಪಾಸಣೆ
ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ ಭಾರತೀಯ ರಕ್ಷಣಾ ಪಡೆ ಕಳೆದ 10 ದಿನಗಳಲ್ಲಿ ನಡೆದ ಮೂರು ಎನ್ ಕೌಂಟರ್ ನಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ 9 ಉಗ್ರರನ್ನು ಕೊಂದು ಹಾಕಿದೆ.
ಕಳೆದ ಭಾನುವಾರ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಟುರಿಜಿಯಮ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ಹತರಾಗಿದ್ದರು.
ಭಾರತೀಯ ಸೇನೆಯ ಯುವ ಪೊಲೀಸ್ ಅಧಿಕಾರಿ ಅಮನ್ ಠಾಕೂರ್ ಮತ್ತು ಸೇನಾಧಿಕಾರಿ ನಾಯಿಬ್ ಸುಬೇದಾರ್ ಸೊಂಬಿರ್ ಸಿಂಗ್ ಹುತಾತ್ಮರಾಗಿದ್ದರು. ನಾಲ್ವರು ಯೋಧರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com