'ನಾನು ಹೇಳುವುದಿಲ್ಲ...': ಶತ್ರುಗಳೆದುರು ಸೇನಾ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ ಯೋಧ ಅಭಿನಂದನ್!

ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಎಫ್-16 ಮೇಲೆ ಪ್ರತಿ ದಾಳಿ ಕಾರ್ಯಾಚರಣೆಯಲ್ಲಿ ಪಾಕ್ ಗಡಿಯಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದೆ.
ವಿಂಗ್ ಕಮಾಂಡರ್ ಅಭಿನಂದನ್
ವಿಂಗ್ ಕಮಾಂಡರ್ ಅಭಿನಂದನ್
ನವದೆಹಲಿ: ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಎಫ್-16 ಮೇಲೆ ಪ್ರತಿ ದಾಳಿ ಕಾರ್ಯಾಚರಣೆಯಲ್ಲಿ ಪಾಕ್ ಗಡಿಯಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದೆ. 
ಈ ಕಾರ್ಯಾಚರಣೆಯಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದೂಅಲ್ಲದೇ ಈಗ ವಿಂಗ್ ಕಮಾಂಡರ್ ಅಭಿನಂದನ್ ಈಗ ಪಾಕಿಸ್ತಾನದ ವಶದಲ್ಲಿರುವುದು ಆತಂಕ ಮೂಡಿಸಿದೆ. ತನ್ನ ಸೆರೆಯಲ್ಲಿರುವ ಯೋಧನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪಡೆಯಲು ಪಾಕಿಸ್ತಾನ ಯತ್ನಿಸಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹೆಚ್ಚಿನ ಮಾಹಿತಿ ಕೇಳಿದಾಗ, ಜೀವ ಭಯ ಇದ್ದರೂ ಸಹ ನಾನು ನೀವು ಕೇಳಿದ ಮಾಹಿತಿಯನ್ನು ಹೇಳುವಂತಿಲ್ಲ ಎಂದು ಹೇಳಿದ್ದಾರೆ. 
ಅಭಿನಂದನ್ ಗೆ ಜೀವಭಯ ಇದೆಯಾದರೂ ಈ ವರೆಗೂ ಸಹ ಅಭಿನಂದನ್ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com