ಎಲ್ಒಸಿ ಬಳಿ ಪಾಕ್ ನಿಂದ ನಿರಂತರ ಗುಂಡಿನ ದಾಳಿ, ಓರ್ವ ಮಹಿಳೆ ಸಾವು

ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗುರುವಾರ ಪಾಕ್ ಸೇನೆ ನಡೆಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗುರುವಾರ ಪಾಕ್ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದಲೂ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ಮಧ್ಯಾಹ್ನ 3 ಗಂಟೆಯಷ್ಟರಲ್ಲಿ ಸುಂದರ್ಬನಿ, ಮಂಕೋಟೆ, ಖರಿ ಕರ್ಮರಾ ಮತ್ತು ದಗ್ವಾರ್ ವಲಯಗಳಲ್ಲಿ ಫಿರಂಗಿಗಳ ಮೂಲಕ ಭಾರಿ ಪ್ರಮಾಣದ ಶೆಲ್​ ದಾಳಿ ನಡೆಸಿದೆ.
ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿದೆ. 
ನಿನ್ನೆ ಸಹ ರಾಜೌರಿ ಜಿಲ್ಲೆ ಕೃಷ್ಣಘಾಟಿ ಹಾಗೂ ಮೆಂಢರ್ ಬಳಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಪಾಕ್ ನ ಎಲ್ಲಾ ದಾಳಿಯನ್ನು ಭಾರತೀಯ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com