ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿರುವ ರಾಜೇಂದ್ರ ಸಿಂಗ್ ಅವರು, ಸಿನ್ಹಾ ಅವರಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಿದ್ದ ವಿಶೇಷ ವಿನಾಯಿತಿ ಕಾಲಾವಕಾಶ ಮುಕ್ತಾಯವಾಗಿದ್ದು, ಇದೇ ಕಾರಣಕ್ಕೆ ಅವರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಅವರ ವಿನಾಯಿತಿ ಅವಧಿ ವಿಸ್ತರಣೆ ಕೋರಿ ಈ ವರೆಗೂ ತಮಗೆ ಯಾವುದೇ ರೀತಿಯ ಅರ್ಜಿ ಅಥವಾ ಆದೇಶ ಕೈ ಸೇರಿಲ್ಲ ಎಂದು ಹೇಳಿದ್ದಾರೆ.