ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿರುವ ಮನೆಗಳು ಹಾಗೂ ಗ್ರಾಮಗಳಲ್ಲಿ ಹೊಸ ಸಂಪರ್ಕ ಕಲ್ಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದರೆ ಈ ಅಭೂತಪೂರ್ವ ಕೆಲಸದಿಂದ ನಾವೆಂದಿಗೂ ಹಿಂದೆ ಸರಿಯುವುದಿಲ್ಲ" ಅಭಿಷೇಕ್ ಜೈನ್ ಹೇಳಿದರು, ಇವರು ದೆಹಲಿಯ ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಆಂಡ್ ವಾಟರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. "ಈಅಗ ನಾವು ನಿಯಮಿತ ಬಿಲ್ಲಿಂಗ್ ಮತ್ತು ವಿಶ್ವಾಸಾರ್ಹ ಸೇವೆಯತ್ತ ಗಮನ ನೀಡಬೇಕಿದೆ.ಹೀಗಾಗದೆ ಹೋದಲ್ಲಿ ಬಹುಸಂಖ್ಯಾತ ಗ್ರಾಹಕರು ದೀರ್ಘಕಾಲದ ಸಂಪರ್ಕದಿಂದ ವಂಚಿತರಾಗುವ ಅಪಾಯವಿದೆ." ಅವರು ಹೇಳಿದ್ದಾರೆ.