ಪ್ರಧಾನಿ ಮೋದಿ ತಮ್ಮ ಸಂದರ್ಶನದಲ್ಲಿ ಇಡೀ ದೇಶವೇ ತತ್ತರಿಸಿ ಹೋಗಲು ಕಾರಣವಾದ ನೋಟು ನಿಷೇಧ, ಜಿಎಸ್ ಟಿ, ಬ್ಯಾಂಕ್ ವಂಚನೆ, ಕಪ್ಪು ಹಣ ರಾಷ್ಟ್ರೀಯ ಭದ್ರತೆ, ರೈತ ಸಮಸ್ಯೆಗಳ ಕುರಿತು ಮಾತನಾಡಬೇಕಿತ್ತು. ಆದರೆ ಅದು ಆಗಿಲ್ಲ. ಪ್ರಧಾನಿ ಮೋದಿ ಅವರ ಸಂದರ್ಶನದ ಸಂಕ್ಷಿಪ್ತ ರೂಪ ಹೇಗಿದೆ ಎಂದರೆ ನಾನು, ನನ್ನ, ನನಗೋಸ್ಕರ ಎಂಬಂತಿದೆ. ಮೋದಿ ಸರ್ಕಾರ 'ಐ'ಸ್ (ನನ್ನದು ಎಂಬ ಸ್ವಾರ್ಥ) ಲೈಸ್ (ಸುಳ್ಳು)ಗಳಿಂಗ ನಲುಗು ಹೋಗುತ್ತಿದ್ದಾರೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.