ಅಂತೆಯೇ ಪ್ರಧಾನಿ ಮೋದಿ ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ, ರೈತ ಸಮಸ್ಯೆಗಳು, ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳ ಕುರಿತು ಮಾತನಾಡುವುದಿಲ್ಲ. ಬದಲಿಗೆ ರಾಮ ಮಂದಿರ, ಮುಗಿದು ಹೋದ ಸರ್ಜಿಕಲ್ ದಾಳಿ ಕುರಿತು ಮಾತನಾಡುತ್ತಾರೆ. ದೇಶದ ರಕ್ಷಣೆಗಾಗಿ ಸೇನೆ ಮಾಡುವ ಕಾರ್ಯಾಚರಣೆಯ ಸಂಪೂರ್ಣ ಯಶಸ್ಸು ಸೇನೆಗೇ ದಕ್ಕಬೇಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲೂ ಸಾಕಷ್ಟು ಬಾರಿ ಸೇನೆ ಶತೃ ರಾಷ್ಟ್ರಗಳ ಗಡಿಯೊಳಗೆ ನುಗ್ಗಿ ಕಾರ್ಯಾಚರಣೆ ಮಾಡಿದೆ. ಆದರೆ ಎಂದೂ ಕಾಂಗ್ರೆಸ್ ಪಕ್ಷ ಅದನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಅಷ್ಟೇ ಏಕೆ ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಇಂದಿರಾಗಾಂಧಿ ದೇಶ ಸೇನೆಯನ್ನು ಕಳುಹಿಸಿಕೊಟ್ಟಿದ್ದರು. ದೇಶದ ಸೈನಿಕರ ಶೌರ್ಯ ಮತ್ತು ಪಾರಾಕ್ರಮದ ಎದುರು ಪಾಕಿಸ್ತಾನ ಸೇನೆ ಮಂಡಿಯೂರಿ ಶರಣಾಗಿತ್ತು ಎಂಬುದನ್ನು ಮೋದಿ ಮರೆಯಬಾರದು ಎಂದು ಹೇಳಿದ್ದಾರೆ.