ಅಯೋಧ್ಯೆಯ ಅರ್ಚಕನಿಂದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ: ಬಂಧನ

ಅಯೋಧ್ಯೆಯ ದೇವಾಲಯವೊಂದರ ಮುಖ್ಯ ಅರ್ಚಕ ಮಹಿಳೆಯೊಬ್ಬರನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿದ್ದಾನೆ.
ಅಯೋಧ್ಯೆಯ ಅರ್ಚಕನಿಂದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ: ಬಂಧನ
ಅಯೋಧ್ಯೆಯ ಅರ್ಚಕನಿಂದ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ: ಬಂಧನ
ಅಯೋಧ್ಯೆಯ ದೇವಾಲಯವೊಂದರ ಮುಖ್ಯ ಅರ್ಚಕ ಮಹಿಳೆಯೊಬ್ಬರನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿದ್ದಾನೆ. 
ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ. ದೇವಾಲಯದ ಮುಖ್ಯ ಅರ್ಚಕನಾಗಿರುವ ಕೃಷ್ಣಕಾಂತಾಚಾರ್ಯ ಧಾರ್ಮಿಕ ಪ್ರವಚನಗಳನ್ನು ನೀಡುತ್ತಿದ್ದ. ಡಿ.24 ರಂದು ಧಾರ್ಮಿಕ ಪ್ರವಚನ ಕೇಳಲು ಬಂದಿದ್ದ ಮಹಿಳೆಯನ್ನು ದೇವಾಲಯದ ಆವರಣದಲ್ಲೇ ಉಳಿಯುವಂತೆ ಸೂಚಿಸಿದ ಅರ್ಚಕ ಆಕೆಯನ್ನು ತನ್ನ ವಶದಲ್ಲಿಟ್ಟುಕೊಂಡು ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಆದರೆ ಅರ್ಚಕನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡುವುದರಲ್ಲಿ ಮಹಿಳೆ ಯಶಸ್ವಿಯಾಗಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿ ಅರ್ಚಕನನ್ನು ಬಂಧಿಸಿದ್ದಾರೆ. 
ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com