ಆಮ್ ಆದ್ಮಿ ಪಕ್ಷಕ್ಕೆ ಅಡ್ವೊಕೇಟ್ ಹೆಚ್ಎಸ್ ಫೂಲ್ಕಾ ಗುಡ್ ಬೈ: ಕಾರಣ ತಿಳಿಯಲಿದೆ ನಾಳೆ

ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಹೆಚ್ ಎಸ್ ಫೂಲ್ಕಾ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಅಡ್ವೊಕೇಟ್ ಹೆಚ್ಎಸ್ ಫೂಲ್ಕಾ ಗುಡ್ ಬೈ: ಕಾರಣ ತಿಳಿಯಲಿದೆ ನಾಳೆ
ಆಮ್ ಆದ್ಮಿ ಪಕ್ಷಕ್ಕೆ ಅಡ್ವೊಕೇಟ್ ಹೆಚ್ಎಸ್ ಫೂಲ್ಕಾ ಗುಡ್ ಬೈ: ಕಾರಣ ತಿಳಿಯಲಿದೆ ನಾಳೆ
ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಹೆಚ್ ಎಸ್ ಫೂಲ್ಕಾ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿದ್ದು, ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಕೇಜ್ರಿವಾಲ್ ಗೆ ರಾಜೀನಾಮೆ ರವಾನೆ ಮಾಡಿರುವುದಾಗಿ ಫೂಲ್ಕಾ ಮಾಹಿತಿ ನೀಡಿದ್ದಾರೆ. "ಕೇಜ್ರಿವಾಲ್ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಜ.04 ರಂದು ಸಂಜೆ 4 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ, ಈ ವೇಳೆ ಆಮ್ ಆದ್ಮಿ ಪಕ್ಷ ತೊರೆಯುವುದಕ್ಕೆ ಕಾರಣವೇನೆಂದು ಹೇಳುವುದಾಗಿ ಎಂದು ಫೂಲ್ಕಾ ಹೇಳಿದ್ದಾರೆ. 
1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಪರವಾಗಿ ಫೂಲ್ಕಾ ನಿಂತಿದ್ದರು. ಇದೇ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ದೋಷಿ ಎಂಬ ತೀರ್ಪು ಬಂದಾಗ ಆಮ್ ಆದ್ಮಿ ಪಕ್ಷ ರಾಜೀವ್ ಗಾಂಧಿ ಅವರ ಭಾರತ ರತ್ನವನ್ನು ವಾಪಸ್ ಪಡೆಯಬೇಕೆಂದು ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಆದರೆ ನಂತರದ ದಿನಗಳಲ್ಲಿ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡಿತ್ತು. ಇದೇ ಫೂಲ್ಕಾ ರಾಜೀನಾಮೆ ನೀಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಸಾಧ್ಯತೆಯನ್ನೂ ಫೂಲ್ಕಾ ವಿರೋಧಿಸುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com