ನವದೆಹಲಿ: ಭಾರತದಲ್ಲಿ ವಾಸಿಸಲು ರಕ್ಷಣೆ ಇಲ್ಲ ಎಂದು ಹೇಳುವವರ ಮೇಲೆ ಬಾಂಬ್ ಹಾಕುವಂತೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರನ್ನು ಬಂಧಿಸಬೇಕೆಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಆಗ್ರಹಿಸಿದ್ದಾರೆ.
ಸಚಿವರಾಗಲು ಬಯಸಿರುವ ಶಾಸಕ ವಿಕ್ರಮ್ ಸೈನಿ, ಜನಗಳಿಗೆ ಬಾಂಬ್ ಹಾಕಲು ನಿರ್ಧರಿಸಿದ್ದಾರೆ, ಅವರ ವಿರುದ್ಧ ತನಿಖೆ ನಡೆಸಿ ಅವರಿಗೆ ಉಗ್ರರ ಜೊತೆ ಸಂಪರ್ಕ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು ಒತ್ತಾಯಿಸಿದ್ದಾರೆ.
ವಿಕ್ರಮ್ ಸೈನಿ ಉಗ್ರರ ರೀತಿ ವರ್ತಿಸುತ್ತಾರೆ, ಒಂದು ವೇಳೆ ಅವರಿಗೆ ಉಗ್ರರ ಜೊತೆ ಸಂಪರ್ಕ ಇದ್ದರೇ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ರಾಜ್ ಬಬ್ಬರ್ ತಿಳಿಸಿದ್ದಾರೆ.