ಹನುಮಂತ ರಾಮನ ದತ್ತು ಪುತ್ರ, ಆತ ವೈಶ್ಯ ಸಮುದಾಯಕ್ಕೆ ಸೇರಿದವ: ಬಿಜೆಪಿ ನಾಯಕ!

ಪಂಚ ರಾಜ್ಯಗಳ ಚುನಾವಣೆ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹನುಮಂತನ ಜಾತಿಯ ಬಗ್ಗೆ ನೀಡಿದ್ದ ಹೇಳಿಕೆಯಿಂದ ಪ್ರಾರಂಭವಾದ ಚರ್ಚೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ಹನುಮಂತ
ಹನುಮಂತ
ಮೀರತ್: ಪಂಚ ರಾಜ್ಯಗಳ ಚುನಾವಣೆ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹನುಮಂತನ ಜಾತಿಯ ಬಗ್ಗೆ ನೀಡಿದ್ದ ಹೇಳಿಕೆಯಿಂದ ಪ್ರಾರಂಭವಾದ ಚರ್ಚೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 
ಹನುಮಂತನ ಜಾತಿಯ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆದ ಬಳಿಕ ಈಗ, ಹನುಮಂತನ ಕುರಿತು ಬಿಜೆಪಿ ನಾಯಕರೊಬ್ಬರು ಹೊಸ ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ ಭಗವಾನ್ ಹನುಮಂತ ವೈಶ್ಯ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯಾಗಿದ್ದನಂತೆ. ಅಷ್ಟೇ ಅಲ್ಲಾ, ಆತ ಭಗವಾನ್ ರಾಮ ದತ್ತು ಪುತ್ರನಾಗಿದ್ದನಂತೆ. 
ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರದಾ ಹೇಳುವ ಪ್ರಕಾರ ರಾಮ ಹಾಗೂ ವೈಶ್ಯ ಸಮುದಾಯ ಒಂದೇ ಪರಂಪರೆಗೆ ಸೇರಿದವರಂತೆ. ಇಷ್ಟೆಲ್ಲಾ ಹೇಳುವ ವಿನೀತ್ ಅಗರ್ವಾಲ್ "ನಿಮ್ಮ ಮುಖ್ಯಮಂತ್ರಿಗಳು ಹನುಮಂತನ ಜಾತಿಯ ಬಗ್ಗೆ ಹೇಳಿದ್ದಕ್ಕೆ ಪ್ರತಿಕ್ರಿಯೆ ಕೊಡಿ" ಅಂತ ಕೇಳಿದ್ದಕ್ಕೆ ಮೌನಕ್ಕೆ ಶರಣಾಗಿ ಪ್ರಶ್ನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಹನುಮಂತನ ಜಾತಿಯ ಹಿಂದೆ ಬಿದ್ದಿರುವ ಬಿಜೆಪಿ ನಾಯಕರು ಸದ್ಯಕ್ಕಂತೂ ಆ ಚರ್ಚೆಯನ್ನು ಕೊನೆಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com