ಲೋಕಸಭೆ ಚುನಾವಣೆ ಹಿನ್ನಲೆ ದೀದಿಗೆ ಶಾಕ್; ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟ್ ಬಂಧನ್ ಮೂಲಕ ಪ್ರಧಾನಿ ಅಭ್ಯರ್ಥಿ ಆಗುವ ಕನಸು ಕಾಣುತ್ತಿರುವ ಬೆನ್ನಲ್ಲೇ ಇದೀಗ ದೊಡ್ಡ ಹಿನ್ನಡೆಯಾಗಿದ್ದು ಅವರದ್ದೆ ಪಕ್ಷದ ಸಂಸದ ಸೌಮಿತ್ರ ಖಾನ್ ಎಂಬುವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಮತಾ ಬ್ಯಾನರ್ಜಿ-ಸೌಮಿತ್ರ ಖಾನ್
ಮಮತಾ ಬ್ಯಾನರ್ಜಿ-ಸೌಮಿತ್ರ ಖಾನ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟ್ ಬಂಧನ್ ಮೂಲಕ ಪ್ರಧಾನಿ ಅಭ್ಯರ್ಥಿ ಆಗುವ ಕನಸು ಕಾಣುತ್ತಿರುವ ಬೆನ್ನಲ್ಲೇ ಇದೀಗ ದೊಡ್ಡ ಹಿನ್ನಡೆಯಾಗಿದ್ದು ಅವರದ್ದೆ ಪಕ್ಷದ ಸಂಸದ ಸೌಮಿತ್ರ ಖಾನ್ ಎಂಬುವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಬಿಸ್ನುಪುರ್ ಕ್ಷೇತ್ರದ ಸಂಸದರಾಗಿರುವ ಸೌಮಿತ್ರ ಖಾನ್ ಅವರು ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2017ರ ನವೆಂಬರ್ ನಲ್ಲಿ ರಾಜ್ಯಸಭಾ ಸಂಸದ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸದ್ಯ ಪಶ್ಚಿಮ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ ಮತ್ತು ಪೊಲೀಸ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ಕಳೆದಂತೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ತೃಣಮೂಲ ಕಾಂಗ್ರೆಸ್ ಗೂಂಡಗಳಿಗೆ ಬೆಂಬಲ ನೀಡುತ್ತಿದೆ. ದಿನ ಬೆಳಗೆದ್ದರೆ ರಾಜ್ಯದಲ್ಲಿ ಕೊಲೆ ಮತ್ತು ಬಾಂಬ್ ದಾಳಿಗಳು ನಡೆಯುತ್ತಿವೆ ಎಂದು ಟಿಎಂಸಿ ವಿರುದ್ಧ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com