ಕೇಂದ್ರ ಸರ್ಕಾರದ ನೀಡಿದ್ದ ಉನ್ನತ ಹುದ್ದೆಯ ಆಫರ್ ತಿರಸ್ಕರಿಸಿದ ನ್ಯಾ. ಎಕೆ ಸಿಕ್ರಿ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ಬಳಿಕ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿರುವ ಎಕೆ ಸಿಕ್ರಿ ಅವರು, ಕೇಂದ್ರ ಸರ್ಕಾರ ನೀಡಿದ್ದ ಸಿಎಎಸ್ ಟಿ ಉನ್ನತ ಹುದ್ದೆಯ ಅವಕಾಶವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ಬಳಿಕ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿರುವ ಎಕೆ ಸಿಕ್ರಿ ಅವರು, ಕೇಂದ್ರ ಸರ್ಕಾರ ನೀಡಿದ್ದ ಸಿಎಎಸ್ ಟಿ ಉನ್ನತ ಹುದ್ದೆಯ ಅವಕಾಶವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಬಿಐ ವಿವಾದ ಸಂಬಂದ ಅಲೋಕ್ ವರ್ಮಾ ವಜಾ ಕುರಿತು ತೀರ್ಪು ನೀಡಿದ್ದ ನ್ಯಾಯಮೂರ್ತಿ ಎಕೆ ಸಿಕ್ರಿ ಅವರಿಗೆ ಕೇಂದ್ರ ಸರ್ಕಾರ ಲಂಡನ್ ಮೂಲದ ಕಾಮನ್ವೆಲ್ತ್ ಸೆಕ್ರೆಟರಿಯಟ್ ಆರ್ಬಿಟ್ರಲ್ ಟ್ರಿಬ್ಯೂನಲ್ ಪ್ರಮುಖ ಹುದ್ದೆಗೆ ಆಹ್ವಾನಿಸಿತ್ತು. ಆದರೆ ಕೇಂದ್ರ ಸರ್ಕಾರದ ಈ ಆಫರ್ ಅನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ನಯವಾಗಿ ತಿರಸ್ಕರಿಸಿದ್ದಾರೆ. ಕಳೆದ ವರ್ಷವೇ ಕೇಂದ್ರ ಸರ್ಕಾರ ಸಿಕ್ರಿ ಅವರಿಗೆ ಈ ಆಫರ್ ನೀಡಿತ್ತು ಎನ್ನಲಾಗುತ್ತಿದ್ದು, ಭಾನುವಾರ ಸಂಜೆ ಸಿಕ್ರಿ ಅವರು ಈ ಆಫರ್ ಅನ್ನು ತಿರಿಸ್ಕರಿಸಿದ್ದಾರೆ.
ಈ ಬಗ್ಗೆ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿರುವ ಸಿಕ್ರಿ ಅವರು, ಕಾರಣಾಂತರಗಳಿಂದ ತಾವು ಈ ಹುದ್ದೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಸಿಬಿಐ ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನ್ಯಾಯಮೂರ್ತಿ ಎಕಿ ಸಿಕ್ರಿ ಅವರೂ ಕೂಡ ಒಬ್ಬರಾಗಿದ್ದರು. 
ಇನ್ನು ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಕ್ರಿ ಅವರ ಆಪ್ತರು, ಸಿಬಿಐ ವಿವಾದಕ್ಕೂ ಎಕೆ ಸಿಕ್ರಿ ಅವರಿಗೆ ಕೇಂದ್ರ ಸರ್ಕಾರ ನೀಡಿದ್ದ ಆಫರ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಅನುಭವದ ಆಧಾರದ ಮೇಲೆ ಅವರಿಗೆ ಈ ಆಫರ್ ನೀಡಲಾಗಿತ್ತು. ಆದರೆ ಅದನ್ನು ಅವರು ಕಾರಣಾಂತರಗಳಿಂದ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಲಂಡನ್ ಮೂಲದ ಕಾಮನ್ವೆಲ್ತ್ ಸೆಕ್ರೆಟರಿಯಟ್ ಆರ್ಬಿಟ್ರಲ್ ಟ್ರಿಬ್ಯೂನಲ್ ನ ನ್ಯಾಯಮೂರ್ತಿ ಹುದ್ದೆಯು ನಾಲ್ಕು ವರ್ಷಗಳ ಅವಧಿಯದ್ದಾಗಿದ್ದು, ಲಂಡನ್ ನಲ್ಲಿ ಇದರ ಪೀಠವಿದೆ. ಒಟ್ಟು 3 ದೇಶಗಳ ಸದಸ್ಯರು ಈ ನ್ಯಾಯಾಧಿಕರಣದಲ್ಲಿದ್ದು, ಭಾರತದಿಂದಲೂ ಓರ್ವ ಪ್ರತಿನಿಧಿ ಇಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ. ಕಾಮನ್ ವೆಲ್ತ್ ದೇಶಗಳ ನಡುವಿನ ಸಮಸ್ಯೆ, ವಿವಾದಗಳನ್ನು ಇಲ್ಲಿ ಪರಿಶೀಲಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com