ಮಾಯಾವತಿ ವಿರುದ್ಧ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ: ಬಿಜೆಪಿ ಶಾಸಕ ಹೇಳಿದ್ದೇನು ಗೊತ್ತೇ?

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಬಿಜೆಪಿ ಶಾಸಕನೋರ್ವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಯಾವತಿ ವಿರುದ್ಧ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ: ಬಿಜೆಪಿ ಶಾಸಕ ಹೇಳಿದ್ದೇನು ಗೊತ್ತೇ?
ಮಾಯಾವತಿ ವಿರುದ್ಧ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ: ಬಿಜೆಪಿ ಶಾಸಕ ಹೇಳಿದ್ದೇನು ಗೊತ್ತೇ?
ನವದೆಹಲಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಬಿಜೆಪಿ ಶಾಸಕನೋರ್ವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಮಾಯಾವತಿ ತಮ್ಮ ಘನತೆಯನ್ನು ಅಧಿಕಾರಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಸಾಧನ ಸಿಂಗ್ ಹೇಳಿದ್ದು ಮಾಯಾವತಿ ಸ್ತ್ರೀ ಕುಲಕ್ಕೇ ಅವಮಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಸಿಂಗ್, ಮಾಯಾವತಿಯನ್ನು ಟೀಕಿಸಲು ಮಹಾಭಾರತವನ್ನೂ ಉಲ್ಲೇಖಿಸಿದ್ದಾರೆ. "ದ್ರೌಪದಿ ಮೇಲೆ ಲೈಂಗಿಕ ಕಿರುಕುಳ ನಡೆದಾಗ ಆಕೆ ಪ್ರತೀಕಾರದ ಶಪಥ ಮಾಡಿದ್ದಳು. ಆದರೆ ಈ ಮಹಿಳೆ( ಮಾಯಾವತಿ) ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೂ ತಮ್ಮ ಘನತೆಯನ್ನೇ ತಾವು ಅಧಿಕಾರಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ. ಮಾಯಾವತಿ ಅವರನ್ನು ನಾವು ಖಂಡಿಸುತ್ತೇವೆ ಆಕೆ ಮಹಿಳೆಯರಿಗೇ ಅವಮಾನ ಎಂದು ಮುಘಲ್ ಸರಾಯ್ ಕ್ಷೇತ್ರದ ಬಿಜೆಪಿ ಶಾಸಕ ಸಿಂಗ್ ಹೇಳಿದ್ದಾರೆ. 
1995 ರಲ್ಲಿ ಮಾಯಾವತಿ ವಿರುದ್ಧ ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಪ್ರಕರಣವನ್ನು ಮಹಾಭಾರತದ ದ್ರೌಪದಿಯ ಮೇಲಿನ ಹಲ್ಲೆಯೊಂದಿಗೆ ಹೋಲಿಕೆ ಮಾಡಿದ್ದಾರೆ. ಆದರೆ ಮಾಯಾವತಿ ಈಗ ಎಲ್ಲವನ್ನೂ ಮರೆತು ಎಸ್ ಪಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದು, ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com