ಹೌದು ಭಯೋತ್ಪಾದನೆಗಿಳಿದು ಬಳಿಕ ಮನಃಪರಿವರ್ತನೆ ಬಳಿಕ ಭಾರತೀಯ ಸೇನೆ ಸೇರಿ ಕುಲ್ಗಾಮ್ ಎನ್ಕೌಂಟರ್ ನಲ್ಲಿ ವೀರ ಮರಣವನ್ನಪ್ಪಿದ್ದ ವೀರ ಯೋಧ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ 'ಅಶೋಕ ಚಕ್ರ' ಗೌರವ ನೀಡಲಾಗುತ್ತಿದೆ. ಇದೇ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಂದು ವೀರ ಯೋಧನ ಕುಟುಂಬಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಬಗ್ಗೆ ಭಾರತ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.