ಇದೇ ವೇಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಘೋಷಣೆ ಮಾಡದ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಡ್ಯಾನಿಷ್ ಅಲಿ ಅವರು, 111 ವರ್ಷಗಳ ಕಾಲ ಬದುಕಿ, ಬದುಕಿದ್ದ ಕೊನೆಯ ಕ್ಷಣದವರೆಗೂ ತ್ರಿವಿಧ ದಾಸೋಹ ಮಾಡಿದ್ದ ಶಿವಕುಮಾರಸ್ವಾಮಿಜಿಗಳನ್ನು ಭಾರತ ರತ್ನಕ್ಕೆ ಆಯ್ಕೆ ಮಾಡಿದಿರುವುದು ಸರ್ಕಾರದ ದುರ್ನಡತೆ ಎಂದು ಟೀಕಿಸಿದ್ದಾರೆ. ಅಂತೆಯೇ ಪ್ರಸ್ತುತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಭೂಪೇನ್ ಹಜಾರಿಕಾ, ನಾನಾಜಿ ದೇಶ್ ಮುಖ್ ಮತ್ತು ಪ್ರಣಬ್ ಮುಖರ್ಜಿ ಅವರ ಸೇವೆಗಳಿಗಿಂತಲೂ ಶಿವಕುಮಾರ ಸ್ವಾಮಿಜಿಗಳ ಸೇವೆ ಅಮೌಲ್ಯವಾದದ್ದು ಎಂದು ಡ್ಯಾನಿಷ್ ಅಲಿ ಹೇಳಿದ್ದಾರೆ.