ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಡ್ಕರಿ, ಸಾಮಾನ್ಯವಾಗಿ ಪ್ರಜೆಗಳು ಭರವಸೆ ನೀಡುವ, ಹೊಸ ಜೀವನದ ಕನಸುಗಳನ್ನು ಬಿತ್ತುವ ನಾಯಕನನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಆ ನಾಯಕ ನೀಡಿದ ಭರವಸೆ ಈಡೇರದಿದ್ದರೆ ಅವರ ಕನಸುಗಳು ಭಗ್ನವಾಗುತ್ತದೆ. ಹೀಗಾಗಿ ಸುಳ್ಳು ಭರವಸೆ ನೀಡಿ ಅದನ್ನು ಈಡೇರಿಸದ ನಾಯಕರನ್ನು ಸಾರ್ವಜನಿಕರು ಸೋಲಿಸುತ್ತಾರೆ ಎಂದು ಹೇಳಿದ್ದರು.