ಗುಜರಾತ್ ನ ಸೂರತ್ ನ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ ಜಾರಿಗೆ ತಂದ ನೋಟು ನಿಷೇಧದಿಂದಾಗಿರುವ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. "ನೋಟು ನಿಷೇಧದಿಂದ ಆದ ಪ್ರಯೋಜನವೇನು ಎಂದು ಕೇಳುತ್ತಾರೆ. ಇದನ್ನು ನೀವು ಯುವಜನತೆಯನ್ನು ಕೇಳಬೇಕು. ನೋಟು ನಿಷೇಧದಿಂದ ಅವರಿಗೆ ಮನೆಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಸಾಧ್ಯವಾಯಿತು. ನೋಟು ನಿಷೇಧಕ್ಕೂ ಮುನ್ನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಪ್ಪು ಹಣ ಇರುತ್ತಿತ್ತು. ಆದರೆ ನೋಟು ನಿಷೇಧ, ರೇರಾ ದಿಂದಾಗಿ ಅವೆಲ್ಲದಕ್ಕೂ ಕಡಿವಾಣ ಬಿತ್ತು ಎಂದು ಮೋದಿ ಹೇಳಿದ್ದಾರೆ.