ನಿನ್ನೆ ಉತ್ತರ ಪ್ರದೇಶದ ಆಲಿಗಢದಲ್ಲಿ ಮಹಾತ್ಮ ಗಾಂಧಿ ಸಾವನ್ನಪ್ಪಿದ ಈ ದಿನವನ್ನು ಹಿಂದೂ ಮಹಾಸಭಾ ಕಾರ್ಯಕರ್ತರು ಶೌರ್ಯದಿನವನ್ನಾಗಿ ಅದ್ಧೂರಿಯಾಗಿ ಆಚರಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ಅಲ್ಲದೇ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥುರಾಮ್ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗೋಡ್ಸೆ ಅಮರ್ ರಹೇ ಎಂದು ಘೋಷಣೆ ಕೂಗಿದ್ದರು.