ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ ಹಾಗಾಗಿ ನಾನು ಚೀನಾಗೆ ತೆರಳುವೆ ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪ್ರಧಾನಿಗಳಿಗೆ ನನ್ನ ಮಾತನ್ನು ಕೇಳುವ ಆಸಕ್ತಿ ಇಲ್ಲ, ಚೀನಾದಲ್ಲಿ ನಡೆಯುವ ವಿದ್ವಾಂಸರ ಸಭೆಗೆ ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಚೀನಾಗೆ ತೆರಳುತ್ತೇನೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವಿಟ್ ಮಾಡಿದ್ದಾರೆ.
ಪ್ರಧಾನಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವ ಸ್ವಾಮಿ ಚೀನಾದ ಪ್ರಸಿದ್ದ ತ್ರಿಂಪುವಾ ವಿಶ್ವವಿದ್ಯಾನಿಲಯ “China’s Economic Development: A Review Of Last 70 years.” ಎಂಬ ವಿಚಾರದ ಕುರಿತು ಮಾತನಾಡಲು ನನಗೆ ಆಹ್ವಾನ ನೀಡಿದೆ. ಈ ವರ್ಷ ಸಪ್ಟೆಂಬರ್ ನಲ್ಲಿ ಚೀನಾದ ವಿದ್ವಾಂಸರ ಸಭೆ ನಡೆಯಲಿದೆ. ಭಾರತದಲ್ಲಿ ನಮೋ ನನ್ನ ಅಭಿಪ್ರಾಯ ಕೇಳಲು ಆಸಕ್ತರಾಗಿಲ್ಲದ ಕಾರಣ ನಾನು ಚೀನಾಗೆ ತೆರಳಬಹುದು" ಎಂದು ಹೇಳಿದ್ದಾರೆ.
China’s famous Tsinghua University has invited me to address in September a gathering of scholars to speak on “China’s Economic Development: A Review Of Last 70 years.” Since Namo is not interested in knowing my views I might as well go to China
ಸ್ವಾಮಿ ಅವರ ಟ್ವೀಟ್ ಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿದ್ದು ಸುಬ್ರಮಣಿಯನ್ ಸ್ವಾಮಿ ದೇಶ ಬಿಟ್ಟು ಹೋಗುವ ಬೆದರಿಕೆ ಹಾಕುತ್ತಿದ್ದಾರೆಯೆ? ಇದಕ್ಕೆ ಕಾರಣವೇನು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.