ಪತ್ರದಲ್ಲಿ ಮೊದಲಿಗೆ ಲೋಕಸಭಾ ಚುನಾವಣೆಯ ದಾಖಲೆಯ ಗೆಲುವಿಗೆ ಪ್ರಧಾನಿಯನ್ನು ಅಭಿನಂದಿಸಿರುವ ಪಾಂಡೆ, ವಂಶಪಾರಂಪರ್ಯೆಯ ರಾಜಕಾರಣವನ್ನು ಖಂಡಿಸಿದ್ದಾರೆ. ನಂತರ, ತಮ್ಮ 34 ವರ್ಷಗಳ ಅನುಭವವನ್ನು ವಿವರಿಸಿರುವ ಅವರು, ಕೊಲಿಜಿಯಂ ವ್ಯವಸ್ಥೆ ಮೂಲಕ ನ್ಯಾಯಮೂರ್ತಿಗಳ ನೇಮಕಾತಿ ನಡೆದಲ್ಲಿ ಜಾತೀಯತೆ ಹಾಗೂ ಸ್ವಜನಪಕ್ಷಪಾತ ಪ್ರಮುಖ ಪಾತ್ರ ವಹಿಸುತ್ತದೆ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.