ಮುಂದಿನ ದಿನಗಳಲ್ಲಿ ಬಿಜೆಪಿ, ಆರ್ ಎಸ್ಎಸ್ ಜೊತೆಗಿನ ನನ್ನ ಹೋರಾಟ 10 ಪಟ್ಟು ಹೆಚ್ಚಾಗಲಿದೆ: ರಾಹುಲ್ ಗಾಂಧಿ

ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆಗೆ ಕಳೆದ 5 ವರ್ಷಗಳಿಗಿಂತ 10 ಪಟ್ಟು ಹೆಚ್ಚು ಹುರುಪಿನಿಂದ ಮುಂದಿನ ದಿನಗಳಲ್ಲಿ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಮುಂಬೈ: ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆಗೆ ಕಳೆದ 5 ವರ್ಷಗಳಿಗಿಂತ 10 ಪಟ್ಟು ಹೆಚ್ಚು ಹುರುಪಿನಿಂದ ಮುಂದಿನ ದಿನಗಳಲ್ಲಿ ಸೈದ್ಧಾಂತಿಕ ಹೋರಾಟ ನಡೆಸುವುದಾಗಿ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಾರ್ವಜನಿಕವಾಗಿ ನಿನ್ನೆ ಬಹಿರಂಗಗೊಳಿಸಿದ ನಂತರ ಇಂದು ಮುಂಬೈಯ ಕೋರ್ಟ್ ನಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಕುರಿತು ಮಾನನಷ್ಟ ಮೊಕದ್ದಮೆ ವಿಚಾರಣೆ ಮುಗಿಸಿ ಹೊರಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಈ ದೇಶದ ಬಡವರು, ರೈತರು ಮತ್ತು ಕಾರ್ಮಿಕರ ಪರವಾಗಿ ಇರುತ್ತೇನೆ. ಬಿಜೆಪಿ, ಆರ್ ಎಸ್ಎಸ್ ಜೊತೆಗಿನ ಸೈದ್ಧಾಂತಿಕ ಹೋರಾಟ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅದನ್ನು ನಾನು ಆನಂದಿಸುತ್ತೇನೆ ಎಂದರು.
ತಮ್ಮ ರಾಜೀನಾಮೆ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ನಾನು ಹೇಳಬೇಕಾಗಿದ್ದನ್ನು 4 ಪುಟದ ರಾಜೀನಾಮೆ ಪತ್ರದಲ್ಲಿ ನಿನ್ನೆ ಎಲ್ಲವನ್ನೂ ಹೇಳಿ ಮುಗಿಸಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com