ಜಾರ್ಖಂಡ್ ನಲ್ಲಿ ಇತ್ತೀಚಿಗೆ ನಡೆದ ತಬ್ರೇಜ್ ಅನ್ಸಾರಿ ಹತ್ಯೆ ಕುರಿತಂತೆ ಮಾತನಾಡಿದ ಓವೈಸಿ, ಶ್ರೀರಾಮ, ಜೈ ಹನುಮನ್ ಎಂದು ಕೂಗುವಂತೆ ಗುಂಪೊಂದು ಒತ್ತಾಯಿಸಿರುವ ವಿಡಿಯೋ ಇದೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಆ ಯುವಕನನ್ನು ಹತ್ಯೆ ಮಾಡಿದವರನ್ನು ಉಗ್ರರು ಎಂದು ಕರೆಯುತ್ತಾರೆಯೇ, ಏಕೆ ಕಾನೂನು ರೂಪಿಸುತ್ತಿಲ್ಲ, ಸುಪ್ರೀಂಕೋರ್ಟ್ ಕಾನೂನು ಜಾರಿಗೆ ತನ್ನಿ ಎಂದು ಹೇಳಿದ್ದರೂ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.