ಕಳೆದ ಜನವರಿ 27ರಂದು ನನ್ನ ಮಗಳ ಮದುವೆಯಾಗಿದ್ದು, ಮದುವೆ ನಂತರ ಆಕೆಯ ಪತಿ ರಾಹುಲ್ ಸಿಂಗ್ ಕಾರು ಕೊಡಿಸುವಂತೆ ನನಗೆ ಒತ್ತಾಯಿಸುತ್ತಿದ್ದರು ರಾಮಕುಮಾರ್ ದೂರಿದ್ದಾರೆ. ಆದರೆ ಮಾವನ ಆರೋಪವನ್ನು ತಳ್ಳಿಹಾಕಿದ ಅಳಿಯ ರಾಹುಲ್ ಸಿಂಗ್ ಅವರು, ನಾನು ಮತ್ತು ನನ್ನ ಪತ್ನಿ ದೌಲತ್ ಪುರಕ್ಕೆ ಹೋಗುತ್ತಿದ್ದಾರೆ ದರೋಡೆಕೋರರು ನಮ್ಮನ್ನು ತಡೆದು ಲೂಟಿ ಮಾಡಿದರು. ಅಲ್ಲದೆ ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರನ್ನು ತಡೆಯಲು ಹೋದ ಸ್ನೇಹಲತಾ ಮೇಲೆ ಗುಂಡು ಹಾರಿಸಿದರು. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಿದ್ದಾರೆ.