ಗಡಿಯಲ್ಲಿ ಗೋ ಸಾಗಣೆಗೆ ಖತರ್ನಾಕ್ ಪ್ಲಾನ್; ಬೆಚ್ಚಿಬಿದ್ದ ಭಾರತೀಯ ಯೋಧರು, ವಿಡಿಯೋ ವೈರಲ್!

ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ. 
ಗಡಿಯಲ್ಲಿ ಗೋ ಸಾಗಣೆಯನ್ನು ಹಲವು ಬಾರಿ ಭಾರತೀಯ ಯೋಧರು ತಡೆಯುವಲ್ಲಿ ಸಫಲರಾಗಿದ್ದಾರೆ. ಈ ಭಾರಿ ಅವರಿಗೆ ಆಶ್ಚರ್ಯ ಎದುರಾಗಿತ್ತು. ಬಾಳೆದಿಂಡಿನಲ್ಲಿ ಹಸುಗಳ ತಲೆಯನ್ನು ತೂರಿಸಿ, ಕಾಲುಗಳನ್ನು ಕಟ್ಟಿ, ನದಿಯಲ್ಲಿ ತೆಲಿಬಿಡುವ ಮೂಲಕ ಅಮಾನವೀಯ ಸ್ಥಿತಿಯಲ್ಲಿ ದನಗಳನ್ನು ಬಾಂಗ್ಲಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಯೋಧರು ಗೋವುಗಳನ್ನು ರಕ್ಷಿಸುವಲ್ಲಿ ಯಸಶ್ವಿಯಾಗಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ವೇಳೆ ರಾಜನಾಥ್ ಸಿಂಗ್ ಅವರು ಬಿಎಸ್ಎಫ್ ಯೋಧರಿಗೆ ಗೋ ಕಳ್ಳರ ವಿರುದ್ಧ ಕ್ರಮಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಳಿಕ ಕಳ್ಳ ಸಾಗಾಣೆಕೆಯಲ್ಲಿ ಇಳಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com