ಮೊದಲಿಗೆ ತಮ್ಮ ಸೀಟಿನ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ನಂತರ ಸದನದ ಬಾವಿಗಿಳಿದು , ಸರ್ವಾಧಿಕಾರಿತ್ವ ನಿಲಲ್ಲಿ, ನಮ್ಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ, ಸಭಾತ್ಯಾಗ ನಡೆಸಿದರು. ಡಿಎಂಕೆ, ನ್ಯಾಷನಲ್ ಕಾನ್ಫರೆನ್ಸ್, ಮತ್ತಿತರ ಪಕ್ಷಗಳು ಈ ಪ್ರತಿಭಟನೆಗೆ ಕೈ ಜೋಡಿಸಿದವು.