ಅಹ್ಮದಾಬಾದ್: 16 ಶಾಸಕರ ರಾಜೀನಾಮೆ ನಿರ್ಧಾರದಿಂದ ರಾಜ್ಯ ಸಮ್ಮಿಶ್ರ ಸರ್ಕಾರ ಪತನದ ಆತಂಕ ಎದುರಿಸುತ್ತಿರುವ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನ ಮುರಿದಿದ್ದಾರೆ.
ಬಿಜೆಪಿ ವಿರುದ್ಧ ಆರೋಪ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ ಹಣ ಹಾಗೂ ಅಧಿಕಾರದ ಬಲವನ್ನು ಬಳಸಿಕೊಂಡು ಸರ್ಕಾರ ಉರುಳಿಸಲು ಯತ್ನಿಸಿದೆ, ಬೇರೆಡೆಗಳಲ್ಲೂ ಇದೇ ಮಾದರಿಯಲ್ಲಿ ಸರ್ಕಾರಗಳನ್ನು ಉರುಳಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ಸರ್ಕಾರಗಳನ್ನು ಉರುಳಿಸಲು ಹಣ ಹಾಗೂ ಅಧಿಕಾರದ ಬಲವನ್ನು ಪ್ರಯೋಗಿಸಿದೆ. ಇದನ್ನು ಮೊದಲು ಗೋವಾದಲ್ಲಿ ನೋಡಿದ್ದೀರಿ, ಈಶಾನ್ಯ ರಾಜ್ಯಗಳಲ್ಲಿ ನೋಡಿದ್ದೀರಿ ಇದನ್ನೇ ಈಗ ಕರ್ನಾಟಕದಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಇದು ಬಿಜೆಪಿಯ ಕಾರ್ಯವಿಧಾನ ಇದೇ ಸತ್ಯ ಎಂದು ಅಹ್ಮದಾಬಾದ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.