ಪ್ರಯಾಗ್ ರಾಜ್: ದಲಿತ ಯುವಕನನ್ನು ಮದುವೆಯಾಗಿರುವ ್ ಉತ್ತರ ಪ್ರದೇಶ ಬಿಜೆಪಿ ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ ಹಾಗೂ ಆಕೆಯ ಪತಿ ಅಜಿತೇಶ್ ಕುಮಾರ್ ಅವರನ್ನು ಇಂದು ಬೆಳಿಗ್ಗೆ ಅಲಹಾಬಾದ್ ಹೈಕೋರ್ಟ್ ಆವರಣದ ಹೊರಗೆ ಶಸ್ತ್ರಸಜ್ಜಿತ ವ್ಯಕ್ತಿಗಳು ಸಿನಿಮೀಯ ಮಾದರಿಯಲ್ಲಿ ಅಪಹರಿಸಿದ್ದಾರೆ. ದಂಪತಿಗಳು ತಮಗೆ ರಕ್ಷಣೆ ನಿಡಬೇಕೆಂದು ಮೊರೆಹೋಗಿದ್ದ ನ್ಯಾಯಾಲಯದ ಆವರಣದಲ್ಲೇ ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.